ಕರಿಮುಗಿಲ ತೆರೆಯಿಂದ
ಇಣುಕುವಾ ರವಿಯಿಂದು
ಜರತಾರಿ ಸೀರೆಯನು ನೇಯುತಿಹನು
ಸಂಜೆಯಲಿ ನಡೆಯುತಿಹ
ಕುಸುರಿ ಕೆಲಸವ ನೋಡಿ
ಸಂತಸದಿ ಭೂತಾಯಿ ನಲಿಯುತಿಹಳು
ಶ್ರಾವಣದ ಜಿನುಗಿನಲಿ
ಪನ್ನೀರ ಹನಿಹೊತ್ತು
ಅವನಿ ತಾ ಹಸಿರಾಗಿ ಹಾಡುತಿಹಳು
ಹಸಿರೆಲೆಯ ತೂಗಿಸುವ
ತನುಮನವ ಕಂಪಿಸುವ
ತಂಬೆಲರು ಹಿನ್ನೆಲೆಯ ನುಡಿಸುತಿಹುದು
ಕಳೆದ ರಸಸಂಜೆಗಳ
ನೆನಪುಗಳು ಮರುಕಳಿಸಿ
ಮಧುರತೆಯಲೀ ಜೀವ ತೇಲುತಿಹುದು
ನಿನ್ನೊಲವಿನಾಸರೆಯ
ನೆಲೆಯ ಬೇಡುತ ಮನವು
ಸುಂದರ ನಿಶೆಯಮಲಲಿ ಕರಗುತಿಹುದು
ಇಡೀ ಕವನವು ತನ್ನ ಸಾದೃಶ ಶಕ್ತಿಯಿಂದಲೇ ಗೆದ್ದಿದೆ.
ReplyDeleteಶ್ರಾವಣ ರಸಮಯ ಸಂಜೆಗಳ ಚಿತ್ರಣವು ಮನೋಹರವಾಗಿದೆ.
ಬದ್ರಿ ಸರ್, ತಮ್ಮ ಮೆಚ್ಚುಗೆಗೆ ಧನ್ಯವಾದಗಳು
Delete