ಜೀವನ-ಕವನ
ಬಲವೆಷ್ಟಿದ್ದರೂ ನೀರೆರೆಯದಿರೆ
ಬದುಕೀತೇ ಹೊಲ?
ಛಲವೆಷ್ಟಿದ್ದರೂ ಬೆವರಿಳಿಯದಿರೆ
ದೊರಕೀತೇ ಫಲ?
ಬಯಕೆಯೆನಿತಿರಲು ಕೃತಿಯಿರದೆ
ಭವಿಸೀತೇ ಕನಸು?
ಮೋಹವೆನಿತಿರಲು ಪ್ರೀತಿಯಿರದೆ
ಸವಿದೀತೇ ಮನಸು?
ಜೀವಜಲದೊರತೆಯೇ ಬತ್ತಿರಲು
ಅಳಿಯದೇ ಚಿಲುಮೆ?
ಭಾವಸೆಲೆಯೊರತೆಯೇ ನಿಂತಿರಲು
ಉಳಿವುದೇ ಒಲುಮೆ?
ಪದಗಳೆನಿತಿರಲು ತುಡಿತವಿರದಿರೆ
ಆಗುವುದೇ ಕವನ?
ಬಂಧಗಳೆನಿತಿರಲು ಮಿಡಿತವಿರದಿರೆ
ಸಾಗುವುದೇ ಜೀವನ?
ಸ್ವಪ್ರಯತ್ನವಿರದೆ ಅವಿರತ ದುಡಿಮೆ ಇರದೆ ಸಿಕ್ಕಲಾರದು ಯಶಸ್ಸು ತಾನು.
ReplyDeleteವ್ಯಕ್ತಿತ್ವ ವಿಕಸನದ ಕವನ.
This comment has been removed by the author.
ReplyDeleteತುಂಬಾ ಚೆನ್ನಾಗಿದೆ ಕವನ. ಒಂದಕ್ಕೊಂದರ ಪೂರಕತೆಯ ಮತ್ತು ಆ ಪೂರಕತೆಯ ಅನಿವಾರ್ಯತೆಯನ್ನು ಸುಂದರವಾಗಿ ಹೆಣೆದಿದ್ದೀರಿ.
ReplyDeleteಸವಿಯಾದ ಬಿಸ್ಕತ್ತು
ಎದುರಿಗಿದ್ದರೂ
ತಿನದಿದ್ದರೆ
ಸವಿದೀತೆ ನಾಲಿಗೆ?