ಧಗೆಯಲಿ ಬುವಿಯ ಬಾಯಾರಿರೆ,
ಸರಿಯಬೇಕಿದೆ ಆದಾನದ ನೆನಪು
ವಸಂತನಾಟದಿ ಸುಮ ನಲುಗಿರೆ,
ಹರಿಯಬೇಕಿದೆ ವರುಣನ ಛಾಪು.
ಜಾಡ್ಯದಿ ಕಾಲ್ಗಳು ಕುಸಿಯುತಿರೆ,
ಬೇಕಿದೆ ತಮ:ಶಮನದ ಹುರುಪು
ಹತಾಶೆಯ ಸುಳಿಯಲಿ ಸಿಲುಕಿರೆ,
ಹರಡಬೇಕಿದೆ ಸತ್ವದ ಹೊಳಪು.
ಬಂಧಗಳ ಬೆಸುಗೆ ಸವೆಯುತಿರೆ,
ಎರೆಯಬೇಕಿದೆ, ಎರಕದ ಬಿಸುಪು.
ನಂಟುಗಳ ಅಂಟಿಂದು ಒಣಗುತಿರೆ,
ಬೆರೆಯಬೇಕಿದೆ, ಒಲವಿನ ಒನಪು.
'ತಮ:ಶಮನದ ಹುರುಪು' ವರುಣನ ಾಗಮನದಿಂದ ಧರೆಗಷ್ಟೇ ಅಲ್ಲ ನಮಗೂ ಸಹ.
ReplyDelete